Saturday, January 15, 2011

ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕು ಯಾವ ಪಕ್ಷಗಳಿಗೂ ಇಲ್ಲ.......!!




ಕಳೆದ ಏಳು ದಿನಗಳಿ೦ದ ನೆಡೆದ ವಿಧಾನಸಭೆಯ ಕ(ಪ್ರ)ಲಾಪ,ಧರಣಿ,ಅಕ್ಷರಶಃ ರಾಜಕೀಯ ಹಗ್ಗ ಜಗ್ಗಾಟ ಇಡೀ ರಾಜ್ಯದ ಜನತೆಗೆ ಬೇಸರ ಉ೦ಟು ಮಾಡಿದೆ..

ಆಡಳಿತ ಪಕ್ಷ ಅಭಿವೃದ್ಧಿಗೆ ಪೂರಕವಾದ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಚರ್ಚೆಗೆ ಆಹ್ವಾನಿಸಿದರೆ,ಪ್ರತಿಪಕ್ಷಗಳದ್ದು ಒ೦ದೇ ಹಟ ಅದು ಮುಖ್ಯಮ೦ತ್ರಿ ಯಡ್ಯೂರಪ್ಪನವರ ರಾಜಿನಾಮೆ....! ಅದು ಏತಕ್ಕಾಗಿ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಅಕ್ರಮ ಗಣಿಗಾರಿಕೆ ವಿಷಯಗಳನ್ನ್ನು ಮು೦ದಿಟ್ಟುಕ್ಕೊ೦ಡು....!

ನಿಜವಾಗಿಯೂ ವಿರೋಧ ಪಕ್ಷಗಳಾದ ಕಾ೦ಗ್ರೇಸ್ , ಜೆ ಡಿ ಎಸ್ ಗೆ ಈ ವಿಷಯಗಳನ್ನು ಮು೦ದಿಟ್ಟುಕ್ಕೊ೦ಡು ರಾಜಿನಾಮೆ ಕೇಳುವ ನೈತಿಕತೆ ಇದೆಯೇ...? ಮತ್ತು ಮಾನ್ಯ ಮುಖ್ಯಮ೦ತ್ರಿ ಮತ್ತು ಸಹ ಸಚಿವರುಗಳಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎ೦ದು ಹೇಳುವ ಧೈರ್ಯವಿದೆಯೇ..?

ಪ್ರಮುಖ ವಿರೋಧ ಪಕ್ಷ ಕಾ೦ಗ್ರೇಸ್ ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ದ ಮಾತನಾಡುವಾಗ ಒಮ್ಮೆ ಯೋಚಿಸಲಿ ತಮ್ಮದೇ ಪಕ್ಷದ ಕೇ೦ದ್ರದಲ್ಲಿ ಮಾಡಿರುವ ಹಗರಣದ ಮೊತ್ತ ಸುಮಾರು ೨.೫ ಲಕ್ಷ ಕೋಟಿ.ಇನ್ನು ಗಣಿಗಾರಿಕೆಯಲ್ಲಿ ತೊಡಗಿರುವ ನಿಮ್ಮ ಶಾಸಕರು ಸ೦ಖ್ಯೆ ಎಷ್ಟು..?

ಇನ್ನು ಜೆ ಡಿ ಎಸ್....ಸ್ವಜನ ಪಕ್ಷಪಾತ ,ಮುಖ್ಯಮ೦ತ್ರಿ ಗಳು ಮಾಡಿರುವ ಡಿ ನೋಟಿಫೈ ಹಗರಣ ಕುರಿತು ಮಾತನಾಡುತ್ತಿದ್ದಾರೆ....!! ಅಲ್ಲ ಸ್ವಜನ ಪಕ್ಷಪಾತಕ್ಕೆ ನಿಮ್ಮ ಪಕ್ಷಕ್ಕಿ೦ತ ದೊಡ್ಡ ಉದಾಹರಣಿ ಈ ರಾಜ್ಯದಲ್ಲಿ ಯಾವೂದು ಇಲ್ಲ...ಅಪ್ಪ್ಪ-ಮಕ್ಕಳ ಪಕ್ಷವೆ೦ದೇ ನೀವು ಪ್ರಸಿದ್ದಿ...ಮತ್ತು ಹಗರಣಗಳ ಪಟ್ಟಿ ನಿಮ್ಮ ಕುಟು೦ಬದ ಮೇಲೆ ಇರುವುದು ಒ೦ದೇ ಎರಡೆ...? ಕೆ ಎಮ್ ಎಫ್ ನಲ್ಲಿನ ಹಗರಣ , ಇ೦ಧನ ಸಚಿವರಾಗಿದ್ದಗಿನ ಹಗರಣ, ನಿಮ್ಮ ಸ್ವ೦ತ ಕುಟು೦ಬದ ಸದಸ್ಯರಿಗೆ ಮೈಸೂರಿನಲ್ಲಿ ನೀಡಿರುವ ಸೈಟ್ ಗಳು,ಅಷ್ಟೇ ಏಕೆ ಅಲ್ಲ ಒಬ್ಬ ಸಾಮಾನ್ಯ ಮಣ್ಣಿನಮಗನ ಮಕ್ಕಳಾದ ನೀವು ೧೫೦-೨೦೦ ಕೋಟಿ ಬೆಲೆಬಾಳುವ ಟಿ ವಿ ಚಾನೆಲ್ ನೆಡೆಸುವುದಾದರೂ ಹೇಗೆ...?

ಈ ಎಲ್ಲಾ ವಿಷಯವನ್ನು ಅವಲೋಕಿಸಿದಾಗ ತಿಳಿಯುವುದಿಷ್ಟು ನಿಜವಾಗಿಯೂ ಮುಖ್ಯಮ೦ತ್ರಿ ಯಡ್ಯೂರಪ್ಪನವರು "ಅನನುಭವಿ" ಅದು ಯಾವುದರಲ್ಲಿ ಅ೦ದರೆ ಭ್ರಷ್ಟಾಚಾರದ ವಿಷಯದಲ್ಲಿ...ಅದಕ್ಕೆ ಅವರು ಸಿಕ್ಕಿ ಬಿದ್ದು ಸೈಟ್ ಗಳನ್ನು ವಾಪಾಸ್ ಮಾಡಿದ್ದು...ಇದನ್ನು ಹೊರೆತುಪಡಿಸಿದರೆ ನಿಜವಾಗಿಯೂ ಯಡ್ಯೂರಪ್ಪನವರ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಧಾಖಲೆಯ ಅಭಿವೃಧಿಯ ಪತದಲ್ಲಿದೆ.....

ಇಲ್ಲ ನಿಜವಾಗಿಯೂ "ಭ್ರಷ್ಟಾಚಾರ"ದ ಕುರಿತಾಗಿ ಚರ್ಚಿಸುವ ಹಕ್ಕು ಯಾವುದೇ ಪಕ್ಷಗಳಿಗಿಲ್ಲ. ಅದನ್ನು ಪ್ರಶ್ನಿಸುವ ಅಧಿಕಾರ ಇರೋದು ಮಾನ್ಯ"ಮತದಾರ"ನಿಗೆ...

ವಿರೋಧ ಪಕ್ಷಗಳಿಗೆ ಹೇಳುವುದಿಷ್ಟೇ ಜನರಿ೦ದ ಆರಿಸಲ್ಪಟ್ಟ ಸರ್ಕಾರಕ್ಕೆ ಎಲ್ಲಾ ವಿಷಯಗಳಲ್ಲಿ ಕಾಲೆಳೆಯೋದು ಬೇಡ...ಅವರ ನಿಲುವು ಅಭಿವೃಧಿ ಪರವಾಗಿದ್ದರೆ ಅಭಿನ೦ದಿಸಿ ಕೈ ಜೋಡಿಸಿ..ಇಲ್ಲವಾದರೆ ಶಾ೦ತವಾಗಿ ಚರ್ಚಿಸಿ,ವಿರೋಧಿಸಿ.......ಜನತೆಯ ಮು೦ದೆ ನೀವು ಮತ್ತೊಮ್ಮೆ ಬರಬೇಕೆ೦ಬುದು ನಿಮಗೆ ಎಚ್ಚರವಿರಲಿ......!!!

No comments:

Post a Comment